Dhurandhar

ಇದೊಂದು ಪಕ್ಕಾ “ಬೇಫಾಂ ಧಾಡಸಿ” ಸಿನಿಮಾ!
ಇದು ಖಂಡಿತವಾಗಿಯೂ ಮುಗ್ಧ ಮನಸ್ಸಿನವರಿಗಲ್ಲ.
ಸಿನಿಮಾದಲ್ಲಿ ವೈಲೆಂಟ್ ಸೀನ್ ಹೆಚ್ಚಾಗಿದ್ದರೂ, ಕಥೆಯ ಗಾಂಭೀರ್ಯಕ್ಕೆ ಅದು ಸಮರ್ಥನೀಯ ಎನಿಸುತ್ತದೆ.

‘ಧುರಂಧರ್’ ಚಿತ್ರವು ಕೇವಲ ಕಲ್ಪನೆಯಲ್ಲ ಬದಲಿಗೆ ಭಾರತದ ಇತಿಹಾಸದ ಕೆಲವು ಕರಾಳ ಮತ್ತು ನೈಜ ಘಟನೆಗಳನ್ನು ಬೆರೆಸಿ ಮಾಡಿದ ಒಂದು ರೋಚಕ ದೇಶಭಕ್ತಿ ಆಧಾರಿತ ಸ್ಪೈ ಥ್ರಿಲ್ಲರ್

1999ರ ಕಂದಹಾರ್ ವಿಮಾನ ಅಪಹರಣ, ಸಂಸತ್ತಿನ ಮೇಲಿನ ದಾಳಿ ಮತ್ತು 26/11 ಮುಂಬೈ ದಾಳಿಯಂತಹ ಘಟನೆಗಳ ಎಳೆಗಳನ್ನು ಬಳಸಿಕೊಂಡು, ಪಾಕಿಸ್ತಾನದ ಕರಾಚಿಯಲ್ಲಿ ಭಾರತದ ಗುಪ್ತಚರ ಇಲಾಖೆ ನಡೆಸಿದ ರಹಸ್ಯ ಕಾರ್ಯಾಚರಣೆಯಾದ ‘ಆಪರೇಷನ್ ಲಿಯಾರಿ’ಯನ್ನು ನಿರ್ದೇಶಕರು ನಮ್ಮ ಮುಂದಿಟ್ಟಿದ್ದಾರೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಸಾಹಸಮಯ ಜೀವನದಿಂದ ಸ್ಫೂರ್ತಿ ಪಡೆದಂತಿರುವ ನಾಯಕನ ಪಾತ್ರ, ಶತ್ರುಗಳ ನೆಲದಲ್ಲಿಯೇ ನಿಂತು ಅವರ ಭಯೋತ್ಪಾದನಾ ಜಾಲವನ್ನು ಹೇಗೆ ಭೇದಿಸುತ್ತಾನೆ ಎಂಬುದನ್ನು ರೋಮಾಂಚನಕಾರಿಯಾಗಿ ತೆರೆಯ ಮೇಲೆ ತರಲಾಗಿದೆ.

ಚಿತ್ರದುದ್ದಕ್ಕೂ ದೇಶಭಕ್ತಿಯ ಭಾವನೆ ಎದ್ದು ಕಾಣುತ್ತದೆ. ಭಯೋತ್ಪಾದನೆಗೆ ತಲೆಬಾಗುವ ಬದಲು ತಿರುಗಿ ಬೀಳುವ ‘ನವ ಭಾರತ’ದ ಸಿದ್ಧಾಂತವನ್ನು ಸಿನಿಮಾ ಎತ್ತಿ ಹಿಡಿಯುತ್ತದೆ. ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್ ಮತ್ತು ಆರ್. ಮಾಧವನ್ ಅವರ ಗಂಭೀರ ಅಭಿನಯ ಚಿತ್ರದ ತೂಕವನ್ನು ಹೆಚ್ಚಿಸಿದೆ. ಚಿತ್ರದ ಅವಧಿ ಸ್ವಲ್ಪ ದೀರ್ಘವಾಗಿದ್ದರೂ, ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುವಲ್ಲಿ ಚಿತ್ರಕಥೆ ಯಶಸ್ವಿಯಾಗಿದೆ.

ಒಟ್ಟಾರೆಯಾಗಿ ‘ಧುರಂಧರ್’ ಕೇವಲ ಆಕ್ಷನ್ ಸಿನಿಮಾವಲ್ಲ, ದೇಶದ ರಕ್ಷಣೆಗಾಗಿ ತಮ್ಮ ಗುರುತು ಮತ್ತು ಪ್ರಾಣವನ್ನು ಪಣಕ್ಕಿಟ್ಟು ಹೋರಾಡುವ ಗುಪ್ತಚರ ವೀರರಿಗೆ ಸಲ್ಲಿಸಿದ ಗೌರವಪೂರ್ಣ ಚಿತ್ರ.

ನೋಡಬಹುದು

Leave a Comment

Your email address will not be published. Required fields are marked *

Scroll to Top